July 4, 2026

ಹಣಕಾಸು ಆಯೋಗ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ Finance Commission and Panchayat Raj System

  ADMIN       July 4, 2026

 


🌿ಹಣಕಾಸು ಆಯೋಗ (Finance Commission) ಮತ್ತು ಪಂಚಾಯತ್ ರಾಜ್ ವ್ಯವಸ್ಥೆ


ಪಂಚಾಯಿತಿಗಳಿಗೆ ಭಾರಿ ಅನುದಾನ:
16ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಒಟ್ಟು ₹18,889 ಕೋಟಿ ಅನುದಾನ ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ಅನುದಾನ: ಆಯೋಗದ ಶಿಫಾರಸಿನಂತೆ ಮುಂದಿನ ಐದು ವರ್ಷಗಳಿಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ₹15,111 ಕೋಟಿ ಮೂಲ ಅನುದಾನ ಮತ್ತು ಕಾರ್ಯ ಸಾಮರ್ಥ್ಯ ಅನುದಾನ ಸೇರಿ ಒಟ್ಟು ₹18,889 ಕೋಟಿ ಹಂಚಿಕೆಯಾಗಿದೆ.

ರಾಷ್ಟ್ರೀಯ ಸಮಾವೇಶ: ನವದೆಹಲಿಯಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಈ ಚರ್ಚೆ ನಡೆದಿದೆ.

ತೆರಿಗೆ ಸಂಗ್ರಹ ಗುರಿ ಸಾಧನೆ: ಕರ್ನಾಟಕದ ಗ್ರಾಮ ಪಂಚಾಯಿತಿಗಳು ಗ್ರಾಮೀಣ ಆಸ್ತಿಗಳಿಂದ ಶೇ. 80ರಷ್ಟು ತೆರಿಗೆ ಸಂಗ್ರಹದ ಗುರಿ ಸಾಧಿಸಿವೆ.

GPDP ಅಪ್‌ಲೋಡ್ ಗಡುವು: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು 2025ರ ಆಗಸ್ಟ್ ಒಳಗಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು (GPDP) ಅಪ್‌ಲೋಡ್ ಮಾಡಿವೆ.

ಹಣಕಾಸು ಆಯೋಗ (Finance Commission - Article 280):


- ಸಂವಿಧಾನದ ವಿಧಿ: ಭಾರತ ಸಂವಿಧಾನದ 280ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ಪ್ರತಿ 5 ವರ್ಷಗಳಿಗೊಮ್ಮೆ ಅಥವಾ ಅಗತ್ಯ ಬಿದ್ದರೆ ಅದಕ್ಕಿಂತ ಮುಂಚಿತವಾಗಿ ಹಣಕಾಸು ಆಯೋಗವನ್ನು ರಚಿಸುತ್ತಾರೆ.
• ಮುಖ್ಯ ಕಾರ್ಯ: ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆಯ ನಿವ್ವಳ ಆದಾಯದ ಹಂಚಿಕೆ ಮತ್ತು ರಾಜ್ಯಗಳಿಗೆ ನೀಡಬೇಕಾದ ಸಹಾಯಾನುದಾನಗಳ (Grants-in-aid) ಬಗ್ಗೆ ಶಿಫಾರಸು ಮಾಡುವುದು.
• 16ನೇ ಹಣಕಾಸು ಆಯೋಗ: ಇದರ ಅಧ್ಯಕ್ಷರು ಅರವಿಂದ್ ಪನಗರಿಯಾ (ಇವರು ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿದ್ದರು). ಈ ಆಯೋಗದ ಶಿಫಾರಸುಗಳ ಅವಧಿ 2026 ರಿಂದ 2031 (5 ವರ್ಷಗಳು).
15ನೇ ಹಣಕಾಸು ಆಯೋಗ: ಇದರ ಅಧ್ಯಕ್ಷರು ಎನ್. ಕೆ. ಸಿಂಗ್ (ನಂದ ಕಿಶೋರ್ ಸಿಂಗ್) ಆಗಿದ್ದರು.ಇದರ ಅವಧಿ 2021-22 ರಿಂದ 2025-26.
• ಮೊದಲ ಹಣಕಾಸು ಆಯೋಗ: 1951 ರಲ್ಲಿ ರಚನೆಯಾಯಿತು,ಇದರ ಅಧ್ಯಕ್ಷರು ಕೆ. ಸಿ. ನಿಯೋಗಿ

🌿ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಸಂವಿಧಾನದ ತಿದ್ದುಪಡಿ

73ನೇ ಸಂವಿಧಾನ ತಿದ್ದುಪಡಿ (1992): ಈ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಲಾಯಿತು. ಇದು ಸಂವಿಧಾನಕ್ಕೆ 9ನೇ ಭಾಗ ಮತ್ತು 11ನೇ ಅನುಸೂಚಿಯನ್ನು (11th Schedule) ಸೇರಿಸಿತು. ಇದು ಪಂಚಾಯಿತಿಗಳಿಗೆ 29 ವಿಷಯಗಳ ಮೇಲೆ ಅಧಿಕಾರ ನೀಡುತ್ತದೆ.
• ರಾಷ್ಟ್ರೀಯ ಪಂಚಾಯತ್ ರಾಜ್ ದಿನ: ಪ್ರತಿ ವರ್ಷ ಏಪ್ರಿಲ್ 24 ರಂದು ಆಚರಿಸಲಾಗುತ್ತದೆ (ಏಪ್ರಿಲ್ 24, 1993 ರಂದು ಈ ಕಾಯ್ದೆ ಜಾರಿಗೆ ಬಂದಿತು).

👉ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ, 1993: ಈ ಕಾಯ್ದೆಯ ಅಡಿಯಲ್ಲಿ ಕರ್ನಾಟಕದಲ್ಲಿ ಮೂರು ಹಂತದ ಪಂಚಾಯತ್ ವ್ಯವಸ್ಥೆ ಜಾರಿಯಲ್ಲಿದೆ:

- ಗ್ರಾಮ ಮಟ್ಟದಲ್ಲಿ - ಗ್ರಾಮ ಪಂಚಾಯಿತಿ
- ತಾಲ್ಲೂಕು ಮಟ್ಟದಲ್ಲಿ - ತಾಲ್ಲೂಕು ಪಂಚಾಯಿತಿ
- ಜಿಲ್ಲಾ ಮಟ್ಟದಲ್ಲಿ - ಜಿಲ್ಲಾ ಪಂಚಾಯಿತಿ.

ರಾಜ್ಯ ಹಣಕಾಸು ಆಯೋಗ (Article 243-I):

ರಾಜ್ಯಪಾಲರು ಪ್ರತಿ 5 ವರ್ಷಗಳಿಗೊಮ್ಮೆ ರಾಜ್ಯದ ಪಂಚಾಯಿತಿಗಳ ಹಣಕಾಸು ಸ್ಥಿತಿಯನ್ನು ಪರಿಶೀಲಿಸಲು ಮತ್ತು ರಾಜ್ಯದ ತೆರಿಗೆ ಆದಾಯವನ್ನು ಸ್ಥಳೀಯ ಸಂಸ್ಥೆಗಳಿಗೆ ಹಂಚಲು ರಾಜ್ಯ ಹಣಕಾಸು ಆಯೋಗವನ್ನು ರಚಿಸುತ್ತಾರೆ
• ರಾಜ್ಯ ಚುನಾವಣೆ ಆಯೋಗ (Article 243-K): ಪಂಚಾಯತ್ ರಾಜ್ ಸಂಸ್ಥೆಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಜವಾಬ್ದಾರಿ ರಾಜ್ಯ ಚುನಾವಣೆ ಆಯೋಗದ್ದಾಗಿರುತ್ತದೆ.

logoblog

Thanks for reading ಹಣಕಾಸು ಆಯೋಗ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ Finance Commission and Panchayat Raj System

Newest
You are reading the newest post

No comments:

Post a Comment

Popular Posts