Footer Logo

September 29, 2021

ಗ್ರಾಮಲೆಕ್ಕಿಗರು ನಿರ್ವಹಿಸಬೇಕಾದ ಕೆಲಸ, ಕಾರ್ಯ, ಜವಾಬ್ದಾರಿಗಳು ಸಂಪೂರ್ಣ ಮಾಹಿತಿ

  ADMIN       September 29, 2021

 ದ್ವಿತೀಯ ಪಿಯುಸಿ, ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳನ್ನು ಮೀಸಲಾತಿ ಮತ್ತು ಮೆರಿಟ್ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಆಯ್ಕೆ ಸಮಿತಿಯ ಮುಖಾಂತರ ಕರ್ನಾಟಕದಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ. ಸದರಿ ಹುದ್ದೆಗಳಿಗೆ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾದವರು ಈ ಕೆಳಗಿನ ಎಲ್ಲ ಜವಾಬ್ದಾರಿಗಳು, ಕೆಲಸ, ಕಾರ್ಯಗಳನ್ನು ನಿರ್ವಹಿಸಬೇಕು.



- ಎಲ್ಲಾ ವಿಧವಾದ ಸರ್ಕಾರಿ ಬಾಕಿ ವಸೂಲಿ ಮಾಡುವುದು.

- ಭೂ ದಾಖಲೆಗಳಾದ ಪಹಣಿ, ಖಾತೆ ಖರೀದಿಗಳನ್ನು ಪ್ರತಿ ವರ್ಷಗಳಿಗೆ ಬರೆಯುವುದು. ಖಾತೆದಾರರು ಮರಣ ಹೊಂದಿದಾಗ, ಜಮೀನು ವಿಭಾಗ ಮಾರಾಟ ಮಾಡಿದಾಗ ಮ್ಯೂಟೇಷನ್‌ ವಹಿಯಲ್ಲಿ ನಿರ್ವಹಣೆ ಮಾಡುವುದು, ಗ್ರಾಮಲೆಕ್ಕಿಗರ ಕೈಪಿಡಿಯಲ್ಲಿ ನಮೂದಿಸಿ ದಾಖಲೆ ನಿರ್ವಹಣೆ ಮಾಡುವುದು.

- ಹಕ್ಕು ದಾಖಲಾತಿ ರಿಜಿಸ್ಟರ್‌ ನಿರ್ವಹಣೆ.

- ಜಮಾಬಂದಿ ಲೆಕ್ಕ ತಯಾರಿಸುವುದು.

- ಪಹಣಿ ನಕಲು ನೀಡುವುದು.

- ಚುನಾವಣೆಯ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

- ಜಿಲ್ಲಾ ಪರಿಷತ್ ವತಿಯಿಂದ ಐಆರ್‌ಡಿಪಿ ಯೋಜನೆಯ ಅನುಷ್ಠಾನಕ್ಕೆ ಫಲಾನುಭವಿಗಳನ್ನು ಗುರುತಿಸಲು ಅಗತ್ಯ ರೆವಿನ್ಯೂ ದಾಖಲೆಗಳನ್ನು ನೀಡುವುದು.

- ಜನನ:ಮರಣ ದಾಖಲೆಗಳ ನೊಂದಾವಣೆ.

- ಗ್ರಾಮ ಮಟ್ಟದಲ್ಲಿ ಸಂಭವಿಸುವ ಬೆಂಕಿ ಅನಾಹುತ, ಇತರೆ ವಿಕೋಪಗಳ ಬಗ್ಗೆ ಉಂಟಾದ ನಷ್ಟದ ಬಗ್ಗೆ ಪರಿಹಾರ ನೀಡುವಲ್ಲಿ ಮತ್ತು ಬರ ಪರಿಹಾರದ ಕಾರ್ಯನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿ ಮತ್ತು ಕಡತ ತಯಾರಿಸಿ ಸಾರ್ವಜನಿಕರಿಗೆ ಎಲ್ಲ ರೀತಿಯ ಸಹಕಾರ ನೀಡುವುದು.


ರಾಜ್ಯದಲ್ಲಿ ಜಿಲ್ಲಾವಾರು ಖಾಲಿ ಇರುವ ಗ್ರಾಮಲೆಕ್ಕಿಗರ(VA) ಹುದ್ದೆಗಳೆಷ್ಟು? ಭರ್ತಿ ಯಾವಾಗ? ಉತ್ತರ ಇಲ್ಲಿದೆ..


- ರೈತರಿಗೆ ಕೃಷಿ ಕಾರ್ಡುಗಳನ್ನು ಬರೆದು ವಿತರಿಸುವುದು.

- ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಅವಶ್ಯಕವಾದ ವಿವಿಧ ರೀತಿಯ ದೃಡೀಕರಣ ಪತ್ರಗಳನ್ನು ನೀಡುವಲ್ಲಿ ಮಾಹಿತಿ ಒದಗಿಸುವುದು. ಅಂದರೆ ಆದಾಯ, ಜಾತಿ, ವಾಸ್ತವ್ಯ, ಇತ್ಯಾದಿ ಪ್ರಮಾಣ ಪತ್ರಗಳನ್ನು ನೀಡುವುದು.



 ಸರ್ಕಾರದ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತರುವಾಗ ಅದರ ಅನುಷ್ಠಾನದ ಜವಾಬ್ದಾರಿಯನ್ನು ಮೊದಲು ತೆಗೆದುಕೊಂಡು ಅವುಗಳನ್ನು ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಗೆ ತಲುಪಿಸಲು ಸಹಕಾರ ನೀಡುವುದು ಮತ್ತು ಯೋಜನೆಗಳು ಕಾರ್ಯಗತವಾಗುವಂತೆ ನೋಡಿಕೊಳ್ಳುವುದು.

- ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ, ಕಲಾವಿದರ ಮಾಸಾಶನ ಮಂಜೂರಾತಿ ಬಗ್ಗೆ ಕಡತಗಳನ್ನು ತಯಾರಿಸುವುದು.

- ಕುಳವಾರ ಬಾಕಿ ಪಟ್ಟಿ ತಯಾರಿಸುವುದು.

- ಬೆಳೆ ಸಮೀಕ್ಷೆ ವರದಿ.

- ಗ್ರಾಮದ ಬಂದರು ಸ್ವತ್ತು ತಯಾರಿಸುವುದು.


ಸಣ್ಣ ಹಾಗೂ ದೊಡ್ಡ ಹಿಡುವಳಿದಾರರ ಹಕ್ಕು ತಯಾರಿಸುವುದು.

- ಭೂ ಸುಧಾರಣೆ ಕಾಯಿದೆಯಂತ ಕಲಂ 79 ಎ ಮತ್ತು 'ಬಿ' ಪ್ರಕರಣಗಳು ಉಲ್ಲಂಘನೆಯಾದಂಥ ಪ್ರಕರಣಗಳನ್ನು ಪತ್ತೆ ಹಚ್ಚುವುದು. ಅನುಚ್ಛೇದ 81ಎ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚುವುದು. ಕೃಷಿ ಮಾಡದ ಪಾಳು ಬಿದ್ದ ಜಮೀನುಗಳ ವಿವರಣೆಗಳ ಕೆಲಸ.

- ಸರ್ಕಾರಿ ದಾಖಲೆಗಳ ದೃಢೀಕರಣ ಪ್ರತಿಯನ್ನು ನೀಡುವುದು.

- ರಿಜಿಸ್ಟರ್‌ಗಳ ನಿರ್ವಹಣೆ, ಟಿಟಿ ರಿಜಿಸ್ಟರ್ ಬೌಂಡರಿ ಮಾರ್ಕ್‌ ರಿಜಿಸ್ಟರ್, ಮ್ಯೂಟೇಷನ್ ರಿಜಿಸ್ಟರ್, ವಿವಾದ ಪ್ರಕರಣಗಳ ರಿಜಿಸ್ಟರ್, ಗ್ರಾಮಗಳ ಅಂಕಿ ಅಂಶಗಳ ರಿಜಿಸ್ಟರ್, ಆಕಾರ್‌ಬಂದ್ ಪಟ್ಟಿ ಬುಕ್‌ಗಳು, ಭೂ ಮಂಜುರಾತಿ ರಿಜಿಸ್ಟರ್, ಭೂ ರಹಿತ ಮತ್ತು ಕೃಷಿ ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿ ರಿಜಿಸ್ಟರ್, ಸರ್ಕಾರಿ ಭೂಮಿಯ ರಿಜಿಸ್ಟರ್ ಮತ್ತು ಇತ್ಯಾದಿ ದಾಖಲಾತಿಗಳ ರಿಜಿಸ್ಟರ್ ನಿರ್ವಹಣೆ.


ಜೀತದಾಳುಗಳ ಪುನರ್ವಸತಿ, ಇನಾಂ ರದ್ದತಿ, ಸಾಲ ಪರಿಹಾರ ಕಾಯಿದೆ.

- ಹಿಡುವಳಿ ಇದ್ದು, ಸಾಗುವಳಿ ಸಕ್ರಮಗೊಳಿಸುವ ಬಗ್ಗೆ, ದರಖಸ್ತು, ಅನ್ಯಕ್ರಾಂತಗಳ್ನು ಭೂಸ್ವಾಧೀನ ಪ್ರಕರಣಗಳ ಕಡತ ತಯಾರಿಸಿ ಮತ್ತು ನಿರ್ವಹಣೆ ಮಾಡುವುದು. ಮೊಜಿಣಿ ಇರುವುದನ್ನು ಮತ್ತು ಅನಧಿಕೃತ ಸಾಗುವಳಿಗೆ ಒಳಪಡದಂತೆ ನೋಡಿಕೊಳ್ಳುವುದು.

- ಸರ್ಕಾರದ ವತಿಯಿಂದ ಈ ಹಿಂದೆ ನೀಡಲಾಗಿರುವ ಜನತಾ ಮನೆ ಸಾಲ, ಒಟ್ಟು ಬಾಕಿ ಸಾಲ, ಟಿಟಿ ಫೈನ್ ಮುಂತಾದ ಬಾಬ್ತುಗಳಿಗೆ ಸಂಬಂಧಿಸಿದ ಮೊಬಲಗನ್ನು ವಸೂಲಿ ಮಾಡುವುದು.

- ಫಸಲು ಪಹಣಿ ಬರೆಯುವುದು.

- ಸರ್ಕಾರಿ ಜಮೀನನ್ನು ಯಾರಾದರೂ ಅತಿಕ್ರಮಿಸಿ ಅನಧಿಕೃತ ಸಾಗುವಳಿ ಮಾಡಿದ್ದಲ್ಲಿ ಅಂತಹ ಪ್ರಕರಣಗಳನ್ನು ಗುರುತಿಸಿ ರಾಜಸ್ವ ನಿರೀಕ್ಷಕರು ಮತ್ತು ತಹಶೀಲ್ದಾರರವರಿಗೆ ವರದಿ ಮಾಡುವುದು.

- ನಿವೇಶನ ರಹಿತರು ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಗುರುತಿಸಿ ಪಟ್ಟಿ ಮಾಡುವುದು.


- ದುರ್ಬಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ಆಗಾಗ್ಗೆ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳ ಬಗ್ಗೆ ಸಂಬಂಧಿಸಿದ ಕಾರ್ಯಾನಿರ್ವಹಣೆ.

- ಜನಗಣತಿ, ಜಾನುವಾರು ಗಣತಿ, ಕೃಷಿ ಗಣತಿ ಮುಂತಾದ ಗಣತಿ ಕಾರ್ಯಗಳಿಗೆ ಸಂಬಂಧಿಸಿದಂತೆ ವಹಿಸಲಾಗುವ ಕಾರ್ಯನಿರ್ವಹಣೆ.

- ಸರ್ಕಾರದ ಆದೇಶದಂತೆ ಅಥವಾ ಮೇಲಾಧಿಕಾರಿಗಳು ಕಚೇರಿಗೆ ಸಂಬಂಧಿಸಿದಂತೆ ವಹಿಸುವ ಇನ್ನಿತರ ಯಾವುದೇ ಕಾರ್ಯಗಳ ನಿರ್ವಹಣೆ.

- ಆಶ್ರಯ ಮತ್ತು ಅಕ್ಷಯ ಯೋಜನೆ ಮತ್ತು ಸರ್ಕಾರದ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯನಿರ್ವಹಣೆ.

- ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಲು ಅರ್ಹ ವ್ಯಕ್ತಿಗಳಿಗೆ ಹಸಿರು ಕಾರ್ಡ್‌ ಹಾಗೂ ಕೇಸರಿ ಕಾರ್ಡ್‌ ನೀಡಲು ಅವಶ್ಯಕ ದಾಖಲೆಗಳನ್ನು ನೀಡುವುದು.




ಗ್ರಾಮ ಲೆಕ್ಕಿಗರ ನೇಮಕಾತಿ ನಿಯಮ / ವಿಧಾನ

ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ತಳಮಟ್ಟದಲ್ಲಿ ಗ್ರಾಮಲೆಕ್ಕಿಗರ ಮೂಲಕ ಕಾರ್ಯಗತಗೊಳಿಸಬೇಕಾದ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾಧಿಕಾರಿಯವರು ಗ್ರಾಮಲೆಕ್ಕಿಗರ ನೇಮಕಾತಿಯ ಸಕ್ಷಮ ಪ್ರಾಧಿಕಾರ ಆಗಿರುವುದರಿಂದ ಮತ್ತು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ, 14)ಕ್ಕೆ ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯೂ ಸಬಾರ್ಡಿನೇಟ್ ಬ್ರಾಂಚ್) (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು 2008 ರನ್ವಯ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಗರಿಷ್ಠ ಅಂಕಗಳನ್ನು ಪರಿಗಣಿಸಿ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ಜಿಲ್ಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಅನುಗುಣವಾಗಿ ನೇರ ನೇಮಕಾತಿ ಮೂಲಕ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ, ಗ್ರಾಮಲೆಕ್ಕಿಗ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

logoblog

Thanks for reading ಗ್ರಾಮಲೆಕ್ಕಿಗರು ನಿರ್ವಹಿಸಬೇಕಾದ ಕೆಲಸ, ಕಾರ್ಯ, ಜವಾಬ್ದಾರಿಗಳು ಸಂಪೂರ್ಣ ಮಾಹಿತಿ

Previous
« Prev Post

2 comments:

  1. I studied in b.com second year. Passed puc in ೨೦೨೦ merit of ೮೫.೫٪ can I apply?

    ReplyDelete

Popular Posts

Followers